ಶಕುನಿ

ದುರ್ಯೋಧನ ಮನಸ್ಸಿಗೆ ತಿದಿಯೊತ್ತಿ
ತನ್ನ ಹೊಟ್ಟೆಕಿಚ್ಚಿನ ಕುಂಡದಲ್ಲಿ ಕಾಯಿಸಿ ಕೆಂಪುಮಾಡಿ
ಕುಟ್ಟುತ್ತಾನೆ ತನಗೆ ಬೇಕಾದಂತೆ.
ಪಗಡೆಪಾಕ ಪಾಂಡವ ಮಂದಿಯ ಮುಸುಡಿಯನ್ನೇ ಮುಕ್ಕಿದಾಗ
ಮೀಸೆ ಕುಣಿಸಿ
ಕೌರವೇಶ್ವರನ ಕಡೆ ನೋಡಿ ಕಣ್ಣಲ್ಲಿ ಕಿಚ್ಚು
ಮುಕ್ಕಳಿಸಿ
ತುಟಿಯಲ್ಲಿ ನಗೆ ತುಳುಕಿಸುತ್ತಾನೆ.
ದೌಪದಿ ‘ಕೃಷ್ಣಾ’ ಎಂದೊರಲಿದಾಗ ಉಷ್ಣಮಾಪಕದಿಂದ
ಮಾನಧನನನ್ನು ಅಳೆಯುತ್ತಾನೆ.
ಫಣಿರಾಜ ಕೇತನನನ್ನು ಕುಣಿವ ಹುಬ್ಬಹುತ್ತದಲ್ಲೇ ಬೆಳಸಿ
ಬುಸ್ಸೆನ್ನಿಸಿ
ಪಾಂಡವರ ಪುನರಾಗಮನಾನಂತರ ಪತಾಕೆ ಹಾರಿಸಲು
ಹುರಿದುಂಬಿಸಿ
ಹಿಮಾಲಯದ ತುಟ್ಟತುದಿಗೆ ಕಳುಹಿಸುತ್ತಾನೆ.
ಛಲದಂಕನಿಗೆಲ್ಲಿಯ ಪ್ರಜ್ಞೆ ಆಮ್ಲಜನಕವಿಲ್ಲದೆ
ಹಿಮಾಲಯ ಹತ್ತಬಾರದೆಂದು!
ಇವನೊಬ್ಬ ಶಕುನಿಯೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುವೆಂಪು ವಿಮರ್ಶೆಯ ವಿಶಿಷ್ಟತೆ
Next post ಒಂದು ಎಲೆ ಹೇಳಿದ್ದು

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys